Mangaluru: ಜೂನ್ 1 2025ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ಮೈದಾನದಲ್ಲಿ 10ನೇ ವರ್ಷದ ಪಟ್ಲ ದಶಮ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಸುಮಾರು 30 ಸಾವಿರಕ್ಕೂ ಅಧಿಕ ಜನ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಬೆಳಿಗ್ಗೆ ಸರಿಯಾಗಿ 8 ಗಂಟೆಗೆ ಅಬ್ಬರ ತಾಳದಿಂದ ಶುರುವಾದ ಕಾರ್ಯಕ್ರಮ ರಾತ್ರಿಯವರೆಗಗೂ ಸರಿಯಾದ ಸಮಯ ಪಾಾಲನೆಯಿಂದ ಮುಕ್ತಾಯವಾಯಿತು.
ಈ ಬಾರಿ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನ, ಯಕ್ಷಗಾನ ಕಾರ್ಯಕ್ರಮ ಸೇರಿದಂತೆ ಈ ವರ್ಷ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಕಾರಣಕ್ಕೆ ಭರತನಾಟ್ಯ, ನೃತ್ಯ ಭಜನೆ, ಯಕ್ಷಗಾನ ಸ್ಪರ್ಧೆ ಏರ್ಪಡಿಸಲಾಗಿತ್ತು. ಇನ್ನು ಸ್ಪರ್ಧೆಗಳಿಗಾಗಿ ಮೂರು ಪ್ರತ್ಯೇಕವಾದ ವೇದಿಕೆ ನೀಡಿದ್ದು ವಿಶೇಷವಾಗಿತ್ತು.
ಅಲ್ಲದೇ ಈ ಬಾರಿ ರಾಷ್ಟ್ರೀಯ ಕಲಾ ಸಮ್ಮೇಳನವನ್ನು ಆಯೋಜಿಸಿದ್ದು, ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾಗಿರುವ ಡಾ.ಎಂ.ಮೋಹನ್ ಆಳ್ವ ಅವರ ಪ್ರಾಯೋಜಕತ್ವ ಮತ್ತು ನಿರೂಪಣೆಯಲ್ಲಿ ಭಾರತದ 8 ಶಾಸ್ತ್ರೀಯ ಕಲೆಗಳ ಪ್ರದರ್ಶನ ನಡೆದಿದ್ದು, ಭಾರತೀಯ ಸಾಂಸ್ಕೃತಿಕ ಕಲೆಗಳನ್ನು ಸವಿಯುವ ಅವಕಾಶ ನೋಡುಗರದಾಗಿತ್ತು.
ಯಕ್ಷಧ್ರುವ ಮಹಿಳಾ ಸದಸ್ಯರಿಂದ ಯಕ್ಷಗಾನ ಮತ್ತು ಯಕ್ಷಧ್ರುವ ಕೇಂದ್ರಿಯ ಸಮಿತಿ ಪದಾಧಿಕಾರಿಗಳಿಂದ ಮಹೀಷ ವಧೆ ಯಕ್ಷಗಾನ ನೆರವೇರಿತು.
ಇನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ದಶಮ ಸಂಭ್ರಮಕ್ಕೆ, ದಶ ಕೋಟಿ ಸಂಭ್ರಮ ಎಂದು ಹೆಸರಿಡಲು ನಿರ್ಧರಿಸಿ, ದಾನಿಗಳಿಂದ 10 ಕೋಟಿ ಧನ ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ ದಶಕೋಟಿ ಮೀರಿ 15 ಕೋಟಿಗೂ ಹೆಚ್ಚಿನ ಧನ ಸಂಗ್ರಹವಾಗಿದ್ದು, ಇದು ಯಕ್ಷಧ್ರುವ ಫೌಂಡೇಶನ್ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ.
ವೈದ್ಯಕೀಯ ಧನಸಹಾಯ 15,000/-, ಆರೋಗ್ಯನಿಧಿ ಧನಸಹಾಯ 50,000/-, ಮರಣೋತ್ತರ ಧನಸಹಾಯ 25,000/-, ಗೃಹ ನಿರ್ಮಾಣ 2,50,000/-, ಪಟ್ಲ ಯಕ್ಷಾಶ್ರಯ ಯೋಜನೆ 5,00,000/-, ಪಟ್ಲ ಯಕ್ಷಾಶ್ರಯ ಯೋಜನೆ 5,00,000/-, ಈಗಾಗಲೇ ಪಟ್ಲ ಯಕ್ಷಾಶ್ರಯ ಯೋಜನೆಯಡಿಯಲ್ಲಿ ಗೃಹ ನಿರ್ಮಾಣಕ್ಕೆ ತಲಾ ೫,೦೦,೦೦೦/- ಲಕ್ಷ ರೂಪಾಯಿಗಳನ್ನು ಹಂತ ಹಂತವಾಗಿ ನೀಡುತ್ತಿದ್ದು, ಈ ಬಾರಿಯ ಪಟ್ಲ ದಶಮ ಸಂಭ್ರಮ ದಲ್ಲಿ ಅಧಿಕೃತವಾಗಿ ಚೆಕ್ ಗಳನ್ನು ವಿತರಿಸಲಾಯಿತು. ಅಲ್ಲದೇ, ಯಕ್ಷಗಾನ, ನಾಟಕ, ಕಂಬಳ, ದೈವಾರಾಧನೆ ಈ ಕ್ಷೇತ್ರದ 3 ಸಾವಿರಕ್ಕೂ ಅಧಿಕ ಮಂದಿಗೆ ಅಪಘಾತ ವಿಮೆ ಮಾಡಿಸಲಾಗಿದೆ.
ನಿಟ್ಟೆ ಕೆ.ಎಸ್.ಹೆಗ್ಡೆಆಸ್ಪತ್ರೆ ಇವರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು.
ವಿವಿಧ ಕ್ಷೇತ್ರಗಳ ಸಾಧಕರಿಗೆ 2025ರ ವರ್ಷದ ಯಕ್ಷಧ್ರುವ ಕಲಾಗೌರವ ಪ್ರಶಸ್ತಿ ನೀಡಲಾಯಿತು. ವೈದಿಕ ಕ್ಷೇತ್ರದಲ್ಲಿ ಸಾಧನೆಗೈದಿರುವುದಕ್ಕೆ ಅಲಂಗಾರು ವೇದಮೂರ್ತಿ ಈಶ್ವರ್ ಭಟ್ ಅವರಿಗೆ, ಮಾಧ್ಯಮ ಕ್ಷೇತ್ರದಲ್ಲಿ ವಿಶ್ವವಾಣಿಯ ವಿಶ್ವೇಶ್ವರ ಭಟ್, ಭಾರತೀಯ ಸೇನೆಯ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಸಾಹಿತ್ಯದಲ್ಲಿ ಡಾ.ಬಿ.ಎ.ವಿವೇಕ್ ರೈ, ಯಕ್ಷಗಾನ ಮಹಿಳಾ ಕಲಾವಿದೆ ನಾಗವೇಣಿ ಮಂಚಿ, ಯಕ್ಷಗಾನ ಬಡಗು ಹೇರಂಜಾಲು ಗೋಪಾಲ ಗಾಣಿಗ, ಯಕ್ಷಗಾನದಲ್ಲಿ ವಸಂತಗೌಡ ಕಾರ್ಯತಡ್ಕ, ಶಾಸ್ತ್ರೀಯ ಸಂಗೀತದಲ್ಲಿ ವಿದ್ವಾನ್ ಎಂ.ನಾರಾಯಣ, ಹರಿಕಥೆ- ಶಂಕರ ನಾರಾಯಣ ಅಡಿಗ, ರಂಗಭೂಮಿ ಕಿಶೋರ್.ಡಿ.ಶೆಟ್ಟಿ, ಭರತ ನಾಟ್ಯದಲ್ಲಿ ವಿದೂಷಿ ಶಾರದಾ ಮಣಿಶೇಖರ್, ಕಂಬಳ ಪ್ರೋ. ಗುಣಪಾಲ ಕಡಂಬ, ಯಕ್ಷಗಾನ ಹವ್ಯಾಸಿ, ದಾಮೋದರ ಶೆಟ್ಟಿ ಮಂಜೇಶ್ವರ, ದೈವಾರಾಧನೆ- ನೋಣಯ್ಯ ನಲಿಕೆ ವಿಟ್ಲ, ದೈವಾರಾಧನೆ- ಸಂಜೀವ ಪರವ, ಭಜನೆ- ಲೋಕನಾಥ ಆಚಾರ್ಯ, ಅಲ್ಲದೇ ಯಕ್ಷಗಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮುಸ್ಲಿಂ ಹವ್ಯಾಸಿ ಯಕ್ಷಗಾನ ಕಲಾವಿದೆ ಅರ್ಶಿಯಾ ತನುವಿಟ್ಲ ಇವರಿಗೆ ಕಲಾಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನು ಐಕಳ ಹರೀಶ್ ಶೆಟ್ಟಿ ಮತ್ತು ಅವರ ಪತ್ನಿ ಚಂದ್ರಿಕಾ ಶೆಟ್ಟಿ, ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅವರಿಗೆ 2025ರ ಮಹಾಪೋಷಕ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.
2025ರ ಯಕ್ಷಧ್ರುವ ಪಟ್ಲ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಭಾಗವತರು ಮತ್ತು ವಿದ್ವಾಂಸರು ಕುರಿಯ ಗಣಪತಿ ಶಾಸ್ತ್ರಿ ಇವರಿಗೆ ನೀಡಿ ಸನ್ಮಾನಿಸಲಾಯಿತು.
ಅಲ್ಲದೇ 10ನೇ ವರ್ಷದ ಸಂಭ್ರಮಕ್ಕೆ ಫೌಂಡೇಶನ್ನ ಮಹಾದಾನಿಗಳಾದ, ಡಾ.ಸದಾಶಿವ ಶೆಟ್ಟಿ ಕನ್ಯಾನ, ಶಶಿಧರ ಬಿ.ಶೆಟ್ಟಿ ಬರೋಡ, ಡಾ.ಕೆ.ಪ್ರಕಾಶ್ ಶೆಟ್ಟಿ, ಸಿ.ಎ.ದಿವಾಕರ್ ರಾವ್, ಶ್ರೀ ಕೆ.ಡಿ.ಶೆಟ್ಟಿ, ಇವರಿಗೆ ಪಟ್ಲ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು. ಇನ್ನು ಸಿ.ಎ.ಸುಧೇಶ್ ಕುಮಾರ್ ರೈ, ಕೋಶಾಧಿಕಾರಿ ಪಟ್ಲ ಫೌಂಡೇಶನ್ ಇವರನ್ನು ದಂಪತಿ ಸಮೇತವಾಗಿ ಸನ್ಮಾನಿಸಲಾಯಿತು.
ದೇಶ ವಿದೇಶಗಳಿಂದ ಹಲವಾರು ಗಣ್ಯರು, ಮಹಾದಾನಿಗಳು, ಯಕ್ಷಧ್ರುವ ಮಹಾಪೋಷಕರು ಆಗಮಿಸಿದ್ದಲ್ಲದೇ, ಅವರ“ಂದಿಗೆ ಉಡುಪಿ ಶ್ರೀಗಳು, ಒಡಿಯೂರು ಶ್ರೀಗಳು, ಎಡನೀರು ಶ್ರೀಗಳು, ಮಾಣಿ ಶ್ರೀಗಳು, ಕಟೀಲು ಆಸ್ರಣ್ಣರು ಸೇರಿ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಹಾರೈಸಿದರು.
ಒಟ್ಟಾರೆಯಾಗಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಕಾರ್ಯಕ್ರಮದಲ್ಲಿ ಹಾಾಜರಿದ್ದವರಿಗೆಲ್ಲರಿಗೂ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು.