ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಯಕ್ಷಾಶ್ರಯ ಯೋಜನೆಯಲ್ಲಿ ನಿರ್ಮಿಸಿದ ವಿನೂತನ ಮನೆಯನ್ನು ಕಟೀಲು ಮೇಳದ ಕಲಾವಿದರಾದ ಪ್ರಶಾಂತ ಕಲ್ಲಡ್ಕ ಅವರ ಕುಟುಂಬಕ್ಕೆ 12.07.2024 ಶುಕ್ರವಾರದಂದು ಹಸ್ತಾಂತರಿಸಲಾಯಿತು. ಎಂ ಆರ್ ಜಿ ಗ್ರೂಪ್ಸ್ ನ ಸಂಸ್ಥಾಪಕರಾದ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರು ಈ ಮನೆಯನ್ನು ನಿರ್ಮಿಸಲು ಆರ್ಥಿಕ ಸಹಕಾರ ನೀಡಿದ್ದಾರೆ.










